Sunday, October 21, 2018

ಪಲಾವ್ ಎಲೆ, ಬಾಸುಮತಿ ಎಲೆ


ಪಲಾವ್ ಎಲೆ, ಬಾಸುಮತಿ ಎಲೆ

ಪಲಾವ್ ಎಲೆ, ಬಾಸುಮತಿ ಎಲೆ ಎಂದೆಲ್ಲ ಕರೆಯುವ ಈ ಎಲೆಗಳು ಆಹಾರಕ್ಕೆ ವಿಶೇಷ ಪರಿಮಳವನ್ನು ಕೊಡುತ್ತದೆ.ಇದನ್ನು ಸಸ್ಯಹಾರ ಮಾಂಸಹಾರ ಮತ್ತು ಸಿಹಿತಿಂಡಿಗಳಲ್ಲಿ ಬಳಸುತ್ತಾರೆ
ಪಾಂಡನಸ್ ಅಮರಿಲ್ಲಿಫೋಲಿಸ್ (Pandanus amaryllifolius) ಇದರ ಸಸ್ಯ ಶಾಸ್ತ್ರೀಯ ಹೆಸರು.ಕೇದಿಗೆ, ತಾಳೆ ಗಿಡಗಳ ಪಾಂಡನೇಸಿ ಕುಟುಂಬಕ್ಕೆ ಸೇರಿರುವ ಈ ಗಿಡವು ಥೈಲ್ಯಾಂಡ್ ಶ್ರೀಲಂಕ ನ್ಯೂಗಿನಿ ಇಂಡೋನೆಷಿಯಾ ವಿಯೆಟ್ನಾಮ್ ದಕ್ಷಿಣ ಭಾರತ ಮುಂತಾದ ಮಳೆಕಾಡಿರುವ ದೇಶಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ.ಎಲೆಗಳನ್ನು ಕತ್ತರಿಸುತ್ತಿದ್ದರೆ ಪುಟ್ಟದಾಗಿಯೇ ಇರುವ ಇದು ಆಳೆತ್ತರಕ್ಕೆ ಬೆಳೆಯುವ ಗಿಡ.ಹಿತ್ತಲಿನಲ್ಲಿ ಪಾಟ್ ನಲ್ಲಿಯೂ ಇದನ್ನು ಬೆಳೆಯಬಹುದು.ಅಡಿಟಾಲ್ ಪೈರೊಲಿನ್ ಎಂಬ ರಾಸಾಯನಿಕವು ಈ ವಿಶೇಷವಾದ ಪರಿಮಳಕ್ಕೆ ಕಾರಣವಾಗಿದೆ.ತಾಳೆ,ಕೇದಿಗೆ ಗಿಡಗಳಲ್ಲಿ ಈ ಸುವಾಸನೆಯು ಹೂವು ಹಣ್ಣುಗಳಲ್ಲಿರುವುದು.ಈ ಗಿಡ ಹೂವು ಬಿಡದ ಕಾರಣ ಇದರ ಎಲೆಗಳು ಈ ಗುಣವನ್ನು ಪಡೆದಿವೆ.ಬಾಸುಮತಿಯಲ್ಲಿಯೂ ಈ ಗುಣಗಳಿರುವುದರಿಂದ ಇದನ್ನು ಬಾಸುಮತಿ ಎಲೆ ಎಂದು ಕರೆಯುವರು.ಆದರೆ ಬಾಸುಮತಿಯ ಸುವಾಸನೆಗಿಂತಲೂ ಹತ್ತುಪಟ್ಟು ಹೆಚ್ಚು ಸುವಾಸನೆಯನ್ನು ಈ ಎಲೆಗಳು ಹೊಂದಿರುವುದರಿಂದ ಸಾಧಾರಣ ಅಕ್ಕಿಯಿಂದ ಮಾಡಿದ ಆಹಾರಗಳಿಗೂ ಇದು ವಿಶೇಷ ಪರಿಮಳ ಕೊಡಲು ಸಾಧ್ಯವಾಗಿದೆ.
ಜೊತೆಗೆ ಈ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣದಿಂದಾಗಿ ಹಲವು ಕಾಯಿಲೆಗಳನ್ನು ಹತೋಟಿಯಲ್ಲಿಡಬಹುದು ದೇಹದೊಳಗಿನ ಮುಕ್ತ ಅಣುಗಳನ್ನು ಹೊರ ಹಾಕುವದರ ಜೊತೆಗೆ ಸೂಪರ್ ಆಕ್ಸೈಡ್ ಆನಯಾನ್ ಮತ್ತುಕಬ್ಬಿಣದ ಮುಕ್ತ ಅಣುಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ..ಇದರ ಎಲೆಗಳ ಕಷಾಯ ಸೇವಿಸುವುದರಿಂದ ರಕ್ತದೊತ್ತಡ ಸಕ್ಕರೆ ಕಾಯಿಲೆ ಯೂರಿಕ್ ಆಸಿಡ್ ಕಿಡ್ನಿ ಸ್ಟೋನ್ ಕ್ಯಾನ್ಸರ್ ಕಾಯಿಲೆಗಳನ್ನು ತಡೆಗಟ್ಟಬಹುದೆಂದು ಸಾಬೀತಾಗಿದೆ.
ಊಟ ಮಾಡಿದ ಸ್ವಲ್ಪ ಹೊತ್ತಿಗೆ ನಾಲಿಗೆ ಗಂಟಲಿನಲ್ಲಾಗುವ ಹುಣ್ಣುಗಳು, ತುಟಿ ಕೆಂಪಾಗಿ ಉರಿಯುವುದು, ಎದೆ ಉರಿ ಇವೆಲ್ಲ ಕೆಲವೊಮ್ಮೆ ಆಕ್ಸಿಡೆಂಟ್ ಗಳ ಪ್ರಭಾವದಿಂದಾಗುತ್ತವೆ.ಆಗ ಇದರ ಎಲೆಯ ಅಥವಾ ಬೇರಿನ ಕಷಾಯ ಕುಡಿಯುವುದರಿಂದ ಉಪಶಮನ ಸಾಧ್ಯ.ರಾತ್ರಿ ಮಲಗುವಾಗ ಹಾಲಿನಲ್ಲಿ ಕುದಿಸಿ ಶೋದಿಸಿ ಸಕ್ಕರೆ ಹಾಕಿ ಕುಡಿಯುವುದರಿಂದ ನಿದ್ರೆ ಚೆನ್ನಾಗಿ ಬರುವುದು.ಇದರ ರಸ ಲೇಪನ ದಿಂದ ಚರ್ಮಕ್ಕೆ ಹೆಚ್ಚಿನ ಹೊಳಪು ಸಿಗುವುದು.ಕೂದಲಿನ ಆರೈಕೆಯಲ್ಲೂ ಇದರ ರಸ ಬಳಸುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಗಟ್ಟಿ ತಲೆಹೊಟ್ಟನ್ನು ನಿವಾರಿಸಿ ಕೂದಲ ಬೆಳವಣಿಗೆಗೆ ಸಹಕಾರಿಯಾಗುವುದು.ಮೈಕೈ ನೋವಿಗೆ ಇದರ ಎಲೆಯ ರಸದಿಂದ ಮಾಡಿದ ಎಣ್ಣೆ ರಾಮಬಾಣ.
ಗಿಡದಿಂದ ಕೊಯ್ದ ಎಲೆಗಳ ಬುಡಕ್ಕೆ ನೀರು ಹಾಕಿ ಬಕೇಟ್ ನಲಿಟ್ಟರೆ ಅಥವಾ ನೀರು ಚಿಮುಕಿಸುತ್ತಿದ್ದರೆ 3-4ದಿನಗಳ ಕಾಲ ತಾಜತನದಿಂದಿರುತ್ತವೆ.
ಇದನ್ನು ಕಂದುಗಳ ಮೂಲಕ ನೆಡಬಹುದು.ಬೇರುಗಳ ಮೂಲಕ ಹೊಸ ಗಿಡಗಳು ಹುಟ್ಟುತ್ತವೆ.ನೀರು ಚೆನ್ನಾಗಿರುವ ಜಾಗದಲ್ಲಿ ವರ್ಷಪೂರ್ತಿ ಹಸಿರಾಗಿರುತ್ತವೆ. ಮಳೆಗಾಲದಲ್ಲಿ ಕಂದು ಮುರಿದರೆ ಗಿಡ ಸಾಯುವ ಸಾಧ್ಯತೆ ಹೆಚ್ಚು.ಮುರಿದ ಬಾಗಕ್ಕೆ ಶಿಲೀಂಧ್ರ ನಾಶಕ ಹಚ್ಚಬೇಕು.
ಈ ಗಿಡದ ಎಲೆಗಳ ಬಳಕೆಯಿಂದ ಇಲ್ಲಿಯವರೆಗೆ ಯಾವುದೇ ಅಡ್ಡ ಪರಿಣಾಮಗಳು ಬೆಳಕಿಗೆ ಬಂದಿಲ್ಲ.


ಕೃಪೆ : ಸಸ್ಯ ಕಣಜ 


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:

Post a Comment

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...