Sunday, October 21, 2018

ಬಸಳೆ ಸೊಪ್ಪು


ರಕ್ತ ಹೆಚ್ಚಿಸುವ ಬಸಳೆ ಸೊಪ್ಪು
-ನಿಯಮಿತವಾಗಿ ಬಸಳೆ ಸೊಪ್ಪನ್ನು ಸೇವಿಸುವು¨ರಿಂದ ಅನೀಮಿಯಾ ಕಡಿಮೆಯಾಗಿ ರಕ್ತ ಹೆಚ್ಚುತ್ತದೆ.
-ಕೀವು ತುಂಬಿದ ಗುಳ್ಳೆಯಾಗಿದ್ದರೆ ಬಸಳೆ ಸೊಪ್ಪಿನ ರಸವನ್ನು ಗುಳ್ಳೆಗೆ ಹಚ್ಚಿದರೆ ಅಥವಾ ರಸವನ್ನು ಕುಡಿದರೇ ಗುಳ್ಳೆ ಬೇಗ ಮಾಯುತ್ತದೆ.
-ಬಸಳೆ ಸೊಪ್ಪನ್ನು ಅಗಿಯುತ್ತಿದ್ದರೆ ಬಾಯಿ ಹುಣ್ಣು ಶಮನವಾಗುತ್ತದೆ.
-ಸುಟ್ಟ ಗಾಯಕ್ಕೆ ಬಸಳೆ ಸೊಪ್ಪಿನ ರಸವನ್ನು ಹಸುವಿನ ತುಪ್ಪದಲ್ಲಿ ಕಲಸಿ ಹಚ್ಚಿದರೆ ಗಾಯ ವಾಸಿಯಾಗುತ್ತದೆ.
-ಬಸಳೆ ಸೊಪ್ಪನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಕಾಡುವ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
-ಬಸಳೆ ಗಿಡದ ಬೇರಿನ ಕಷಾಯ ಸೇವಿಸಿದರೆ ಭೇದಿ ನಿಲ್ಲುತ್ತದೆ.
-ಬಸಳೆ ಹೂವನ್ನು ಪೇಸ್ಟ್‌ ಮಾಡಿ ಹುಳು ಕಚ್ಚಿದ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗಿ ಗಾಯ ಗುಣವಾಗುತ್ತದೆ.
-ಗರ್ಭಿಣಿಯರು ಹೆರಿಗೆ ನೋವು ಬಂದಾಗ ಬಸಳೆ ಸೊಪ್ಪಿನ ಕಷಾಯ ಕುಡಿದರೆ ನೋವು ಸ್ವಲ್ಪ ಕಡಿಮೆಯಾಗುತ್ತದೆ.
-ಬಸಳೆ ಎಲೆಗಳ ಲೋಳೆಯನ್ನು ಹಣೆ ಮೇಲೆ ಲೇಪಿಸಿದರೆ ತಲೆನೋವು ಕಡಿಮೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ.
-ಬಸಳೆ ಸೊಪ್ಪು ಮತ್ತು ಅದರ ಬೇರನ್ನು ಕಷಾಯ ಮಾಡಿ ಸೇವಿಸಿದರೆ ತಾಯಿಯ ಎದೆ ಹಾಲು ಹೆಚ್ಚುತ್ತದೆ.
-ಅಂಗೈ ಮತ್ತು ಅಂಗಾಲು ಉರಿ ಇದ್ದರೆ ಬಸಳೆ ಸೊಪ್ಪಿನ ರಸವನ್ನು ಹಚ್ಚಿದರೆ ಉರಿ ನಿವಾರಣೆಯಾಗುತ್ತದೆ.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:

Post a Comment

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...