ಶಂಖಪುಷ್ಪ
ಶಂಖಪುಷ್ಪ ನೋಡಲು ಸುಂದರ. ಅಷ್ಟೆ ಅಲ್ಲ ಆರೋಗ್ಯ ವರ್ಧಕವೂ ಹೌದು.
ಶಂಖದಂತೆ ಕಂಡು ಬರುವ ಈ ಹೂವಿಗೆ ಶಂಖ ಪುಷ್ಪ ಎಂದು ಹೆಸರು. ಬಿಳಿ ಮತ್ತು ನೀಲಿ ಬಣ್ಣದ ಪುಷ್ಪಗಳು ಕಂಡು ಬರುತ್ತದೆ (ಅನ್ಯ ಬಣ್ಣಗಳು ಕೂಡ ಇದೆ). ಬಳ್ಳಿಯಲ್ಲಿ ಬೆಳೆಯುವ ಈ ಹೂಗಳಿಗೆ ತಂಪಿನ ವಾತಾವರಣ ಅಗತ್ಯ. ಹಾಗೆ ನೀರು ಕೂಡ ಬಹಳ ಅಗತ್ಯ. ದೇವರ ಪೂಜೆಗೂ ಉಪಯೋಗಿಸುತ್ತಾರೆ.
ಬೀನ್ಸ್ ಬಳ್ಳಿಯಂತಿರುವ ಈ ಸಸ್ಯವು ಬೇರೆ ಗಿಡವನ್ನು ಆಧಾರವಾಗಿರಿಸಿಕೊಂಡು ಹರಡಿ ಬೆಳೆಯುತ್ತದೆ. ಹೂವಿನ ದಳಗಳು ಶಂಖದ ಒಳಭಾಗದ ಆಕಾರವನ್ನು ಹೊಂದಿರುವ ಕಾರಣ ಈ ಹೆಸರು ಬಂದಿದೆ. ಅದರಲ್ಲೂ ತೆಳ್ಳಗಿನ ಮತ್ತು ದಪ್ಪದ ದಳಗಳಿರುವ ಎರಡು ಜಾತಿಗಳಿವೆ. ಪರಿಮಳದ ಸೋಂಕಿಲ್ಲದ ಈ ಹೂವು ದೇವರ ಪೂಜೆಗೆ ವಿನಹ ಹೆಣ್ಣಿನ ಮುಡಿಗೇರುವುದಿಲ್ಲ. ಆದರೆ ಬಳ್ಳಿಯಾಗಿ ಹರಡಿ ವರ್ಷದುದ್ದಕ್ಕೂ ಬಿಳಿ ಅಥವಾ ನೀಲವರ್ಣದ ಹೂಗಳನ್ನು ಕೊಡುವ ಗಿಡ ಮನೆಯಂಗಳಕ್ಕೆ ಅಲಂಕಾರಿಕ.
ಬೀನ್ಸ್ ಬಳ್ಳಿಯಂತಿರುವ ಈ ಸಸ್ಯವು ಬೇರೆ ಗಿಡವನ್ನು ಆಧಾರವಾಗಿರಿಸಿಕೊಂಡು ಹರಡಿ ಬೆಳೆಯುತ್ತದೆ. ಹೂವಿನ ದಳಗಳು ಶಂಖದ ಒಳಭಾಗದ ಆಕಾರವನ್ನು ಹೊಂದಿರುವ ಕಾರಣ ಈ ಹೆಸರು ಬಂದಿದೆ. ಅದರಲ್ಲೂ ತೆಳ್ಳಗಿನ ಮತ್ತು ದಪ್ಪದ ದಳಗಳಿರುವ ಎರಡು ಜಾತಿಗಳಿವೆ. ಪರಿಮಳದ ಸೋಂಕಿಲ್ಲದ ಈ ಹೂವು ದೇವರ ಪೂಜೆಗೆ ವಿನಹ ಹೆಣ್ಣಿನ ಮುಡಿಗೇರುವುದಿಲ್ಲ. ಆದರೆ ಬಳ್ಳಿಯಾಗಿ ಹರಡಿ ವರ್ಷದುದ್ದಕ್ಕೂ ಬಿಳಿ ಅಥವಾ ನೀಲವರ್ಣದ ಹೂಗಳನ್ನು ಕೊಡುವ ಗಿಡ ಮನೆಯಂಗಳಕ್ಕೆ ಅಲಂಕಾರಿಕ.
ಇಂಗ್ಲಿಷಿನಲ್ಲಿ ಬಟರ್ ಫ್ಲೆಪಿಯೆ ಎಂಬ ಹೆಸರಿರುವ ಶಂಖಪುಷ್ಪ ಕ್ಲಿಟೋರಿಯ ಟಿರ್ನೆಟಿಯ (Clitoria Ternatea)
ಎಂದು ಸಸ್ಯಶಾಸ್ತ್ರದಲ್ಲಿ ಕರೆಯುತ್ತಾರೆ. ಬಿಳಿವರ್ಣದ ಹೂ ಬಿಡುವ ಶಂಖಪುಷ್ಪ ವೈದ್ಯ ದಷ್ಟಿಯಿಂದ ಹೆಚ್ಚು ಪ್ರಭಾವಶಾಲಿಯೆಂದು ಹೇಳಲಾಗಿದೆ. ಹೊಟ್ಟೆ ಸೆಳೆತ, ಪಚನದ ತೊಂದರೆ, ಪಿತ್ತಜನಕಾಂಗ, ಮೂತ್ರಪಿಂಡ, ಅನ್ನನಾಳ, ಪಿತ್ತಕೋಶಗಳ ಕಾಯಿಲೆ ಹಾಗೂ ಹೊಟ್ಟೆ ಉಬ್ಬರದ ತೊಂದರೆಗಳನ್ನು ಇವುಗಳ ಬಳಕೆಯಿಂದ ನಿವಾರಿಸಬಹುದೆಂದು ಆಯುರ್ವೇದ ಹೇಳಿದೆ.
ಎಂದು ಸಸ್ಯಶಾಸ್ತ್ರದಲ್ಲಿ ಕರೆಯುತ್ತಾರೆ. ಬಿಳಿವರ್ಣದ ಹೂ ಬಿಡುವ ಶಂಖಪುಷ್ಪ ವೈದ್ಯ ದಷ್ಟಿಯಿಂದ ಹೆಚ್ಚು ಪ್ರಭಾವಶಾಲಿಯೆಂದು ಹೇಳಲಾಗಿದೆ. ಹೊಟ್ಟೆ ಸೆಳೆತ, ಪಚನದ ತೊಂದರೆ, ಪಿತ್ತಜನಕಾಂಗ, ಮೂತ್ರಪಿಂಡ, ಅನ್ನನಾಳ, ಪಿತ್ತಕೋಶಗಳ ಕಾಯಿಲೆ ಹಾಗೂ ಹೊಟ್ಟೆ ಉಬ್ಬರದ ತೊಂದರೆಗಳನ್ನು ಇವುಗಳ ಬಳಕೆಯಿಂದ ನಿವಾರಿಸಬಹುದೆಂದು ಆಯುರ್ವೇದ ಹೇಳಿದೆ.
ಅರೆತಲೆನೋವು ನಿವಾರಿಸಲು ಶಂಖಪುಷ್ಪದ ಬೇರನ್ನು ತೇದು ಅಂಜನದ ಹಾಗೆ ಕಣ್ಣಿಗೆ ಸವರಬೇಕು.
ಎಲೆಗಳ ರಸವನ್ನು ಬಿಸಿ ಮಾಡಿ ಲೇಪಿಸಿದರೆ ಬಾವು ನೋವು ಗುಣವಾಗುತ್ತದೆ.
ಬೇರಿನ ರಸವನ್ನು ಹಾಲಿನಲ್ಲಿ ಬೆರೆಸಿ ಶ್ವಾಸನಾಳಗಳ ಬಾಧೆ ನಿವಾರಣೆಗೆ ಬಳಸುವುದುಂಟು.
ಮುಖದಲ್ಲಿ ಬಿಳಿಕಲೆಗಳಿದ್ದರೆ ಬೇರನ್ನು ಕ್ಷಾರ ಮಾಡಿ ಎಳ್ಳೆಣ್ಣೆಯಲ್ಲಿ ಕಲಸಿ ಲೇಪಿಸಬಹುದು.
ಬೇರಿನ ತೊಗಟೆಯಿಂದ ತಯಾರಿಸಿದ ಚೂರ್ಣವನ್ನು ಜೀರಿಗೆ ಕಷಾಯದಲ್ಲಿ ಕದಡಿ ಜೇನುತುಪ್ಪ ಬೆರೆಸಿ ಸೇವಿಸಿದರೆ ದೇಹಬಾಧೆ ನಿವಾರಣೆ.
ಬೀಜವನ್ನು ಹುರಿದು ಹುಡಿ ಮಾಡಿ ಬೆಂಕಿ ಗುಳ್ಳೆಗಳ ನೋವು ಶಮನದ ಔಷಧಕ್ಕೆ ಬಳಸುತ್ತಾರೆ.
ಖಾಲಿ ಹೊಟ್ಟೆಗೆ ಬೇರು ತೇದಿ ಎರಡು ಚಮಚದಷ್ಟು ಒಂದು ಲೋಟ ನೀರಿನೊಂದಿಗೆ ಕುಡಿದರೆ ಉಬ್ಬಸದಿಂದ ಸಂಪೂರ್ಣ ಗುಣಮುಖರಾಗುವಿರಿ.
ವೈದ್ಯಗ್ರಂಥಗಳಲ್ಲಿ ಇದರ ಹೂವಿನಿಂದ ಉನ್ಮಾದ, ಅಪಸ್ಮಾರ ಇತ್ಯಾದಿ ಬಾಧೆ ಶಮನಕ್ಕೆ ತಯಾರಿಸುವ ಪಾನಕದ ವಿಧಿಗಳಿವೆ.
ಹುರಿದ ಬೀಜಗಳನ್ನು ಹುಡಿಮಾಡಿ ಬೀರಿನೊಂದಿಗೆ/ಮಜ್ಜಿಗೆಯೊಂದಿಗೆ ಜಾಂಡಿಸ್ ಕಾಯಿಲೆಗೆ ನಾಟಿ ಔಷಧಿಯಾಗಿ ಬಳಸುತ್ತಾರೆ. ಬೆಂಕಿ ತಾಗಿದ ಉರಿ ಶಮನಕ್ಕೆ ಬೀಜ ಅರೆದು ಲೇಪಸುತ್ತಾರೆ. ಹೊಟ್ಟೆ ಉಬ್ಬರದ ತೊಂದರೆಗಳನ್ನು ಶಂಖಪುಷ್ಪದ ಬಳಕೆಯಿಂದ ನಿವಾರಿಸಬಹುದೆಂದು ಆಯುರ್ವೇದ ಹೇಳಿದೆ. ಶಂಖಪುಷ್ಪದ ಎಲ್ಲಾ ಮದ್ದುಗಳಿಗೆ ರಕ್ತದ ಸಕ್ಕರೆ ಅಂಶವನ್ನು ಹೀರುವ ಗುಣವಿದ್ದು, ಸಕ್ಕರೆ ಕಾಯಿಲೆಯಿರುವ ರೋಗಿಗಳು ವೈದ್ಯರ ಸಲಹೆ ಮೇರೆಗೆ ಎಚ್ಚರಿಯಿಂದ ಇದರ ಮದ್ದುಗಳನ್ನು ಬಳಸುವುದು ಹಿತ. ಹೆಚ್ಚಾಗಿ ಮಳೆಗಾಲದಲ್ಲಿ ಬಲ್ಲೆಯಂತೆ ಹಬ್ಬುವ ಇದು ಅಲಂಕಾರಿಕ ಸಸ್ಯವೂ ಹೌದು. ದೇವರ ಪೂಜೆಗೆ ಹೇಳಿ ಮಾಡಿಸಿದ ಹೂವಿದು..ಅತ್ಯಪಯುಕ್ತ ಔಷಧೀಯ ಗುಣಗಳ ಆಗರವಾಗಿರುವ ಇಂತಹವುಗಳ ಬಗ್ಗೆ ಅರಿತು ಬೆಳೆಸಿ ಅಳಿಯದಂತೆ ಕಾಪಿಡುವ ಜವಬ್ದಾರಿ ನಮ್ಮ ನಿಮ್ಮೆಲ್ಲರದು.
ಕೃಪೆ : ಸಸ್ಯ ಕಣಜ
ಸೂಚನೆ : ಈ
ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು
ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.
No comments:
Post a Comment